Slide
Slide
Slide
previous arrow
next arrow

ಪಾದಚಾರಿಯ ಮೇಲೆ ಹರಿದ ಲಾರಿ: ಗಾಯಾಳು ಆಸ್ಪತ್ರೆಗೆ ದಾಖಲು

300x250 AD

ಯಲ್ಲಾಪುರ: ಪಟ್ಟಣದ ರಾಷ್ಟ್ರೀಯ ಹೆದ್ದಾರಿಯ ವಿಶ್ವದರ್ಶನ ಶಾಲೆ ಬಳಿ ಪಾದಚಾರಿಯೋರ್ವನ ಮೇಲೆ ಲಾರಿಯೊಂದು ಹರಿದು, ಆತನ ಕಾಲು ತುಂಡಾದ ಘಟನೆ ಸಂಭವಿಸಿದೆ.

ಪಟ್ಟಣದ ರಾಘವೇಂದ್ರ ವೃದ್ಧಾಶ್ರಮದ ವಾಚ್‌ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ದಿಲೀಪ್ ಕದಮ್ ಎಂಬಾತ ರಸ್ತೆಯ ಬದಿಯಲ್ಲಿ ನಡೆದು ಹೋಗುತ್ತಿದ್ದಾಗ ಆಯತಪ್ಪಿ ರಸ್ತೆಗೆ ಬಿದ್ದಿದ್ದು,ಅದೇ ವೇಳೆ ಬಂದ ಲಾರಿಯ ಹಿಂಬದಿಯ ಚಕ್ರ ಪಾದಚಾರಿಯ ಮೇಲೆ ಹಾಯ್ದ ಪರಿಣಾಮ ಪಾದಚಾರಿಯ ಕಾಲು ತುಂಡಾಗಿದ್ದು, ಆತನನ್ನು ಸ್ಥಳೀಯ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ.

300x250 AD
Share This
300x250 AD
300x250 AD
300x250 AD
Back to top